ಜಾರತ ಕರ್ಮವು ತೀರಿದ ಬಳಿಕ

ಜಾರತ ಕರ್ಮವು ತೀರಿದ ಬಳಿಕ
ಆರಿಲ್ಲದೋಯಿತು ಐಸುರ ಕೊಳಕ          ||ಪ||

ಮಾರನೋಮಿಗೆ ಕೂಡಿ ಬಂದಿತು
ಆರಿಗ್ಹೇಳಲಿ ತೀರಲರಿಯದು
ಮೂರು ಪುರವನು ನಾಶಮಾಡಿತು
ಘೋರತರದಲಾವಿಯ ಹಬ್ಬ              ||೧||

ಶುದ್ದಚಂದ್ರನ ಕಿರಣವು ಸೋಂಕಿ
ಎದ್ದು ಭೂಮಿಗೆ ಗುದ್ದಲಿ ಹಾಕಿ
ಸದ್ಯಕಿದು ವೇದಾಂತ ಶಾಸ್ತ್ರದ
ಮಧ್ಯದಲಿ ಹುಡಿಕ್ಯಾಡಿ ನೋಡಿಕೋ
ಬುದ್ಧಿವಂತರಿಗೆ ತಿಳಿಯತಕ್ಕದ್ದು
ಚೋದ್ಯವಾದಕ್ಷರ ಪದದಲಿ            ||೨||

ಪಾಪಾತ್ಮರಿಗೆ ಫಕೀರನು ಖೋಡಿ
ಕೆಂಪು ಕರದು ಹಸಿರು ಹಾಕಿ ಲಾಡಿ
ರೂಪ ತಪ್ಪಿಸಿಕೊಂಡು ಲೋಕದಿ
ಮನಿ ಮನಿಯ ತಿರಕೊಂಡು ತಿಂದರೆ
ಈ ಪದವಿ ಹ್ಯಾಂಗ ಸಿಕ್ಕೀತೋ
ಭೂಪ ಶಿಶುನಾಳಧೀಶ ಸಾರಿದ           ||೩||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕ ಪಯಣದಲ್ಲೊಂದು ಆಕಸ್ಮಿಕ
Next post ವಚನ ಸಂಪತ್ತು

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys